ಪತ್ರಿಕೆ ವಿಶ್ವಾಸಾರ್ಹತೆ ಕಳೆದುಕೊಳ್ಳಬಾರದು : ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

ರಾಜ್ಯ ರಾಷ್ಟ್ರೀಯ ಶಿವಮೊಗ್ಗ
*ಪತ್ರಿಕೆ ವಿಶ್ವಾಸಾರ್ಹತೆ ಕಳೆದುಕೊಳ್ಳಬಾರದು*
  1.  *ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು*
ಶಿವಮೊಗ್ಗ: ಪತ್ರಿಕೆ ಒಮ್ಮೆ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ ಜನ ಕಾಲಕ್ರಮೇಣ ಪತ್ರಿಕೆಯನ್ನು ನಂಬುವುದಿಲ್ಲ. ಹಾಗಾಗಿಯೇ ಕೆಲವೊಂದು ಇಂಗ್ಲಿಷ್ ಪತ್ರಿಕೆಗಳು, ಕನ್ನಡ ಪತ್ರಿಕೆಗಳು ದೋಣಿ ಮಗುಚದಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಒಮ್ಮೆ ವಿಶ್ವಾಸವನ್ನು ಕಳೆದುಕೊಂಡರೆ ಒಬ್ಬ ಪ್ರಾಮಾಣಿಕ ಪತ್ರಕರ್ತನಿಂದ ಪತ್ರಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಕೇವಲ ಓದುಗನ ಹಣದಿಂದ ಪತ್ರಿಕೆ ನಡೆಸುವುದು ಸಾಧ್ಯವಿಲ್ಲ. ಮಾಧ್ಯಮದ ಮಾಡೆಲ್‌ನಲ್ಲಿಯೇ ತಪ್ಪಿದೆ. ಇದನ್ನು ತಿಳಿಯದೆ ಸಾರ್ವಜನಿಕರು ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಕಳೆದ ೨೦-೩೦ ವರ್ಷಗಳಲ್ಲಿ ಮಾಧ್ಯಮ ಬದಲಾಗಿದೆ. ರೈತನ ಬೆಳೆ ಮತ್ತು ಪತ್ರಿಕೆ ಒಂದೇ ಆಗಿದೆ ಎಂದರು.
ಸಾಮಾನ್ಯ ಮನುಷ್ಯನಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಕರ್ತನಿಗೆ ಇದೆ. ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಬಹಳ ಕಡೆ ಹೇಳುತ್ತಾರೆ. ಮೂರು ಅಂಗಗಳಿಗೆ ಸರ್ಕಾರದ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತದೆ. ಆದರೆ ಪತ್ರಕರ್ತರಿಗೆ ರಕ್ಷಣೆ ಇಲ್ಲ. ಅತಿಯಾಗಿ ಆತ ಬೆಳೆಯುವುದಕ್ಕೆ ಬಿಡುವುದಿಲ್ಲ. ಮೊದಲೆಲ್ಲ ಓದುಗರಿಗೆ ಧ್ವನಿ ಇರಲಿಲ್ಲ. ಆದರೆ ಈಗ ಓದುಗನಿಗೆ ಧ್ವನಿ ಇದೆ. ಸಾಮಾಜಿಕ ಜಾಲತಾಣಗಳಿಂದ ಇಬ್ಬರ ತಪ್ಪನ್ನು ಪ್ರಶ್ನೆ ಮಾಡುವ ಧ್ವನಿ ಬಂದಿದೆ. ಉತ್ತರದಾಯಿತ್ವ, ಪಾರದರ್ಶಕತೆ ಇದೆ. ಎಷ್ಟೋ ವೈರಲ್ ಪೋಸ್ಟ್ ಗಳಿಂದ ಒಳ್ಳೆಯದು ಕೂಡ ಆಗಿದೆ. ಜಗತ್ತಿನ ಜ್ಞಾನ ಬೆರಳ ತುದಿಯಲ್ಲಿದೆ. ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದಿದ್ದರೂ ಸಹ ಬೆಳಗ್ಗೆ ಪತ್ರಿಕೆ ಓದಿದರೆ ಸಮಾಧಾನ ತೃಪ್ತಿ. ಪ್ರಸ್ತುತ ಆಳವಾದ ಅಧ್ಯಯನ ಬೇಕಾಗಿಲ್ಲ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ, ಅಂಬೇಡ್ಕರ್ ನೀಡಿರುವ ಸಂವಿಧಾನ, ಇತಿಹಾಸ ಇವುಗಳ ಕುರಿತು ಸಮಾಜಕ್ಕೆ ಎಚ್ಚರಿಸುವ, ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡಲು ದಿಟ್ಟ ಹೆಜ್ಜೆ ಅಗತ್ಯ. ಯಾವುದೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ಎದುರಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಿದ್ದಾರೆ. ವಿಶೇಷವಾದ ಲೇಖನಿ ಮೂಲಕ ರಾಷ್ಟ್ರವನ್ನು ತಿದ್ದುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಪತ್ರಿಕಾ ಮಾಧ್ಯಮಗಳ ಲೇಖನಗಳು ಜನರಿಗೆ ಇವತ್ತಿಗೂ ಕೂಡ ಆಗಬೇಕಾಗಿದೆ. ಅದರ ಸಮಾಧಾನಕರ ತೃಪ್ತಿ ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವುದಿಲ್ಲ. ಪತ್ರಿಕೆ ಯಾವತ್ತಿಗೂ ಹಳೆಯದಾಗಲೂ ಸಾಧ್ಯವಿಲ್ಲ. ನಿಮ್ಮ ಲೇಖನಿ ಸಿದ್ಧಾಂತಗಳು ಬೇರೆ ಬೇರೆ ಇದ್ದರು ಸಹ ಸತ್ಯಾ ಸತ್ಯಾತತೆಯನ್ನು ತಿಳಿಸುವ ಕೆಲಸವನ್ನು ಮಾಡಬೇಕು ಎಂದರು.
” ಉಳಿದವರ ಕಷ್ಟವನ್ನು ಪತ್ರಕರ್ತರು ಬರೆಯುತ್ತಾರೆ. ಆದರೆ ಪತ್ರಕರ್ತರ ಕಷ್ಟವನ್ನು ಯಾರು ಬರೆಯುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಯಾರಿಗೆ ಇದೆ,
ರಾಜಕಾರಣಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ .ಆದರೆ ಮತದಾರನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯಾ. ಮಾಧ್ಯಮ ಕ್ಷೇತ್ರದ ದೊಡ್ಡ ಶತ್ರುಗಳು ರಾಜಕಾರಣಿಗಳು ಅಲ್ಲ. ರಾಜಕಾರಣಿಗಳಿಗೆ ನೀವು ಎಷ್ಟಾದರೂ ಬೈದರೂ ಸಹ ದಕ್ಕಿಸಿಕೊಳ್ಳಬಹುದು. ಆದರೆ ಧರ್ಮ ಗುರುಗಳಿಗೆ ಮುಟ್ಟಿದರೆ ನನಗೆ ನೋಟಿಸ್ ಬರುತ್ತದೆ. ನಿಮ್ಮ ತಲೆಗಳು ಹೋಗುತ್ತವೆ. “
– ದಿನೇಶ್ ಅಮೀನ್ ಮಟ್ಟು