ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದ ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದ ವೆಬ್ಸೈಟ್ ಉದ್ಘಾಟನೆ

ರಾಜ್ಯ ಶಿವಮೊಗ್ಗ
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದ ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದ ವೆಬ್ಸೈಟ್ ಉದ್ಘಾಟನೆ
ಹಿಂದೂ ಧರ್ಮ ಉಳಿಸುವಲ್ಲಿ ಮರಾಠ ಸಮಾಜದ ಕೊಡುಗೆ ಅಪಾರ
ಶಿವಮೊಗ್ಗ : ಸನಾತನ ಹಿಂದೂ ಧರ್ಮವನ್ನು ಉಳಿಸುವಲ್ಲಿ ಮರಾಠ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಇಂದು ಶಿವಮೊಗ್ಗ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಸಂಘ ಆಯೋಜಿಸಿದ್ದ ಮರಾಠ ಸಮಾಜದ ವೆಬ್‌ಸೈಟ್ ಲಾಂಚ್ ಹಾಗೂ ಸಮಾಜದ ಹಿರಿಯ ಮುಖಂಡರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ವೆಬ್‌ಸೈಟ್ ಬಿಡುಗಡೆ ಮಾಡಿ ಮಾತನಾ ಡಿದರು.

 

ಮರಾಠ ಸಮಾಜವು ರಾಷ್ಟ್ರಭಕ್ತ ಸಮಾಜವಾಗಿದೆ. ಶಿವಾಜಿಯ ತಾಯಿ ಜೀಝಾಬಾಯಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸುವಲ್ಲಿ ಅವರು ಆದರ್ಶವಾಗಿದ್ದಾರೆ. ಸನಾತನ ಹಿಂದೂ ಧರ್ಮದ ಕಲ್ಪನೆಯ ಕೊಟ್ಟವರೇ ಮರಾಠ ಸಮುದಾಯದವರು ಎಂಬುವುದು ಹೆಗ್ಗಳಿಕೆಯಾಗಿದೆ. ಶಿವಾಜಿ ಮಹಾರಾಜ್ ಅವರು ಹಿಂದೂ ಧರ್ಮದ ಉಳಿವಿಗಾಗಿ ಶ್ರಮಿಸುವರು ಎಂದರು.
ಮರಾಠ ಸಮಾಜವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿ ಕವಾಗಿ ಸ್ವಾವಲಂಭಿಗಳಾಗಬೇಕು. ಮುಖ್ಯವಾಗಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು. ರಾಜ್ಯ ಸರ್ಕಾರದಲ್ಲೂ ಕೂಡ
ಮರಾಠ ಸಮಾಜದ ಅಭಿವೃದ್ಧಿ ಗಾಗಿಯೇ ನಿಗಮವಿದೆ. ತಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ಈ ಸಮಾಜಕ್ಕೆ ಹಲವು ರೀತಿಯಲ್ಲಿ ನೆರವು ನೀಡಿದ್ದಾರೆ ಎಂದರು.
ಮರಾಠ ಸಮಾಜದವರ ಬೇಡಿಕೆಯಂತೆ ಶಿವಮೊಗ್ಗದ ಆಲ್ಲೋಳ ವೃತ್ತದಲ್ಲಿ ಛತ್ರಪತಿ ಶಿವಾಜಿಯವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾ ಗುವುದು ಎಂದರು.
ವಿಧಾನಪರಿಷತ್‌ ಸದಸ್ಯ ಮರಾಠ ಸಮಾಜದ ಮುಖಂಡ ಎಂ.ಜಿ. ಮೂಳೆ ಮಾತನಾಡಿ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದು ನಮ್ಮ ಸಮಾಜವನ್ನು ಪ್ರತಿನಿಧಿಸುವ ಏಕೈಕ ನಾಯಕರಾಗಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕದಲ್ಲಿ ಅನೇಕ ನೆನಪುಗಳನ್ನು ಬಿಟ್ಟಿದ್ದಾರೆ ಎಂದರು.
ಛತ್ರಪತಿ ರಾಜಾರಾಮ್ ಅವರಿಗೆ ಔರಂಗಜೇ ಬನನ್ನು ಎದುರು ಹಾಕಿಕೊಂಡು ಎರಡು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಆಶ್ರಯ ನೀಡಿದವರು ವೀರರಾಣಿ ಕೆಳದಿ ಚೆನ್ನಮ್ಮ. ಅಲ್ಲು ಒಂದು ದೊಡ್ಡಮಟ್ಟದಲ್ಲಿ ಸ್ಮಾರಕ ಹಾಗಬೇಕಾಗಿದೆ ಎಂದರು.
ಷಹಾಜೀ ಮಹಾರಾಜರು ಜನಿಸಿದ ಜಾಗದಲ್ಲೂ ಮಹಾರಾಷ್ಟ್ರದಲ್ಲಿ ಒಂದು ಸ್ಮಾರಕವಾ ಗಬೇಕಾಗಿದ್ದು, ಪ್ರೇಕ್ಷಣೀಯ ಸ್ಥಳವಾಗಬೇಕು. ಹಾಗೆಯೇ ಬೆಂಗಳೂರಿನಲ್ಲಿ ಷಹಾಜೀ ಮಹಾರಾಜರ ಪುತ್ಥಳಿ ಮತ್ತು ಕನ್ವಷನ್‌ ಹಾಲ್ ಹಾಗಬೇಕು ಎಂದರು.
ಮೊಟ್ಟಮೊದಲ ಜಲಯುದ್ಧವನ್ನು ಪ್ರಪಂಚಕ್ಕೆ ತೋರಿಸಿದ ಶಿವಾಜಿ ಮಹಾರಾಜರ ಸಾಮರ್ಥಕ್ಕೆ ಈಗ ಇಂಡಿಯನ್ ನೇವಿ ಕೂಡ ತನ್ನ ಭಾವುಟದಲ್ಲಿ ಶಿವಾಜಿ ಮಹಾರಾಜರ ಮುದ್ರೆ ಯನ್ನು ಸ್ಥಾಪಿಸಿದೆ . ಅದು ನಮಗೆ ಗೌರವದ ವಿಚಾರವಾಗಿದೆ. ಎಲ್ಲೆಲ್ಲಿ ಮರಾಠ ಸಮಾಜದ
ಜನರಿದ್ದಾರೆ. ಅಲ್ಲಿ ಸ್ವಾಭಿಮಾನದ ಹಿಂದೂ ಸಾಮ್ರಾಜ್ಯಕ್ಕೆ ಲಭ್ಯವಾಗುತ್ತದೆ. ಉಡುಪಿಯ ಬಸೂರ್‌ನಲ್ಲಿ ಕೂಡ ಶಿವಾಜಿ ಮಹಾರಾಜರ ಪಳಿಯುಳಿಕೆ ಇದ್ದು. ಅಲ್ಲೂ ಕೂಡ ಒಂದು ಸ್ಮಾರಕ ಆಗಬೇಕು ಎಂಬುವುದು ನನ್ನ ಇಚ್ಛೆ ಇದಕ್ಕೆ ಸರ್ಕಾರ ಸ್ಪಂಧಿಸಬೇಕು ಎಂದರು.
ಕಾರ್ಮಿಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ನಾಗರೀಕರನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಬೆಂಗಳೂರಿನ ಗೋಸಾಯಿ ಮಠದ ಶ್ರೀಮಂಜುನಾಥ ಭಾರತೀ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಚಿನ್ ಶಿವಾಜಿರಾವ್ ಸಿಂಧ್ಯಾ ವಹಿಸಿದ್ದು ಕಾರ್ಯಕ್ರಮದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಾ.ಧನಂಜಯ ಸರ್ಜಿ. ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸದಸ್ಯ ಹಾಗೂ ಸಾಮಾಜದ ಗೌರವಾಧ್ಯಕ್ಷ ಎಂ.ಪ್ರವೀಣ್‌ ಕುಮಾ ರ್. ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಸಮಾಜದ ಮುಖಂಡರಾದ ದೇವರಾಜ್ ಸಿಂಧ್ಯಾ, ಗೀತಾ ಸತೀಶ್, ಶಿವಾಜಿರಾವ್, ಪ್ರಕಾಶ್ ಭಾಗೋಜಿ, ಸಮಾಜದ ಗೌರವಾಧ್ಯಕ್ಷರಾದ ಪ್ರವೀಣ್ ಕುಮಾರ್,   ಕವಿತಾ ಯೋಗಪ್ಪನವ‌ರ್, ಯಮು ನಾ ರಂಗೇಗೌಡ, ಕೆ.ರಂಗನಾಥ್ ಸೇರಿದಂತೆ ಹಲವರಿದ್ದರು.
ಕವಿತಾರಾವ್ ಸ್ವಾಗತಿಸಿದರು. ದೇವರಾಜ್ ಸಿಂಧ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಜಿಲ್ಲೆಯ ಹಲವು ಕಡೆಗಳಿಂದ ಬಂದ ಮರಾಠ ಸಮಾಜದ ಬಾಂಧವರು ಶಿವಾಜಿ ಪ್ರತಿಮೆಯ ಜೊತೆಗೆ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂ ಡಿದ್ದರು.