ಎಂ. ಶ್ರೀಕಾಂತ್ ರವರನ್ನು ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಅಪೆಕ್ಸ್‌ ಬ್ಯಾಂಕಿನ ಪ್ರತಿನಿಧಿ ಯನ್ನಾಗಿ ನಾಮನಿರ್ದೇಶನ ಸದಸ್ಯರಾಗಿ ನೇಮಕ

ರಾಜ್ಯ ಶಿವಮೊಗ್ಗ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಜನ ಸೇವಕ, ಸ್ನೇಹಜೀವಿ ಎಂ. ಶ್ರೀಕಾಂತ್ ಅವರನ್ನು ಕೊನೆಗೂ ಅವರ ಆಪ್ತ ವಲಯ ಕೈ ಹಿಡಿದಿದೆ. ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಅಪೆಕ್ಸ್‌ ಬ್ಯಾಂಕಿನ ಪ್ರತಿನಿಧಿ ಯನ್ನಾಗಿ ನಾಮನಿರ್ದೇಶನಮಾಡಲಾಗಿದೆ. ಈ ಸಂಬಂಧ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮುಖ್ಯ ಪ್ರಧಾನ ವ್ಯವಸ್ಥಾಪಕರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಈ ಆದೇಶ ಪತ್ರ ರವಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆ. 15 ರ ಸ್ವಾತಂತ್ರೋತ್ಸವದ ದಿನದಂದು ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಆವರಣದಲ್ಲಿ ಬ್ಯಾಂಕ್ ಅಧ್ಯಕ್ಷರಾದ ಆ‌ರ್.ಎಂ. ಮಂಜುನಾಥ ಗೌಡ, ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಅವರು ಶ್ರೀಕಾಂತ್ ಅವರನ್ನು ಅಭಿನಂದಿಸಿ, ಶುಭ ಹಾರೈಸಿದರು.

ಶಿವಮೊಗ್ಗದ ನಗರದಲ್ಲಿ ನಿಜವಾದ ಜನಸೇವಕ ಎನ್ನುವ ಹೆಗ್ಗಳಿಕೆ ಎಂ.ಶ್ರೀಕಾಂತ್ ಅವರಿಗಿದೆ. ಅಧಿಕಾರ ಇರಲಿ,ಬಿಡಲಿ ಬಡವರು, ಬಗ್ಗರು, ಶೋಷಿತ
ಸಮುದಾಯಕ್ಕೆ ಅವರ ಜನ ಸೇವೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಯಾರೇ,ಯಾವುದೇ ಕ್ಷಣ ಸಹಾಯ ಕೇಳಿ ಹೋದರೂ ಅವರಿಗೆ ಪರಿಹಾರ ನೀಡುವ, ತಮ್ಮಿಂದ ಸಹಾಯ ಮಾಡುವ ಗುಣ ಅವರದು.
ಹಾಗಾಗಿಯೇ ಎಂ. ಶ್ರೀಕಾಂತ್ ಎಂದರೆ ನಿಜವಾದ ಜನಸೇವಕ ಎನ್ನುವುದರ ಜತೆಗೆ ಪಕ್ಷಾತೀತವಾಗಿ ದೊಡ್ಡ ಸ್ನೇಹ ಬಳಗವನ್ನು ಹೊಂದಿದ ಖ್ಯಾತಿಯೂ ಅವರದು.
ಇವರನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಹಾಗೂ ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಆರ್ .ಎಂ ಮಂಜುನಾಥ್ ಗೌಡ ರವರಿಗೆ ಹಾಗೂ ಉಪಾಧ್ಯಕ್ಷರಾದ
ಎಸ್.ಕೆ ಮರಿಯಪ್ಪ ನವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪನವರಿಗೆ, ಶಾಸಕರಾದ ಗೋಪಾಲಕೃಷ್ಣ ಬೇಲೂರು, ಬಿ.ಕೆ. ಸಂಗಮೇಶ್ವರ್, ಆಯನೂರು ಮಂಜುನಾಥ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಹಾಗೂ ಡಿಸಿಸಿ ಬ್ಯಾಂಕ್ ಎಲ್ಲಾ ನಿರ್ದೇಶಕರಿಗೂ ಎಂ. ಶ್ರೀಕಾಂತ್ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ